ಮೈಸೂರು ರಾಜ್ಯವು, ಅಥವಾ ಆಡುಮಾತಿನಲ್ಲಿ ಹಳೆಯ ಮೈಸೂರು, ೧೯೪೭ರಿಂದ ಭಾರತ ಪ್ರಭುತ್ವದಲ್ಲಿನ ಮತ್ತು ೧೯೫೬ರವರೆಗೆ ತದನಂತರದ ಭಾರತ ಗಣರಾಜ್ಯದಲ್ಲಿನ ರಾಜ್ಯವೊಂದು ಆಗಿ ಇದ್ದಿತು. ಮೈಸೂರು ಮಹಾಸಂಸ್ಥಾನವನ್ನು ನಾಮಕರಿಸಿ ಮೈಸೂರು ರಾಜ್ಯವನ್ನು ಸೃಷ್ಟಿಸಲಾಯಿತು; ಅದರೊಂದಿಗೆ ಮೈಸೂರಿನಿಂದ ಬೆಂಗಳೂರಿಗೆ ರಾಜಧಾನಿಯನ್ನು ಸ್ಥಳಾಂತರಿಸಲಾಯಿತು. ಭಾರತದ ಸಂಸತ್ತು ೧೯೫೬ರ ಭಾಷಾಶಾಸ್ತ್ರೀಯ ಆಧಾರದ ಮೇಲೆ ರಾಜ್ಯಗಳ ಮರುಸಂಘಟನೆ ಕಾಯಿದೆಯನ್ನು ಹೊರಡಿಸುವುದರೊಂದಿಗೆ ಭಾರತ ಗಣರಾಜ್ಯದಲ್ಲಿನ ಆಂಧ್ರ ರಾಜ್ಯ, ಬಾಂಬೆ ರಾಜ್ಯ, ಕೊಡಗು ರಾಜ್ಯ, ಹೈದರಾಬಾದ್ ರಾಜ್ಯ, ಮಡ್ರಾಸ್ ರಾಜ್ಯ, ಮತ್ತು ಹಲವು ಕ್ಷುಲ್ಲಕ ಪ್ರಾಂತ್ಯಗಳ ಸೀಮಾ ಪ್ರದೇಶಕೆಲವನ್ನು ಮೈಸೂರು ರಾಜ್ಯದೊಂದಿಗೆ ಸಂಯೋಜಿಸುವುದರೊಂದಿಗೆ ಮೈಸೂರು ರಾಜ್ಯವು ಏಕರೂಪ ಕನ್ನಡ ಭಾಷೆಯ ನಾಡಾಗಿ ಗಣನೀಯವಾಗಿ ವಿಸ್ತ್ರತಗೊಂಡಿತು. ನಂತರ, ೧೯೭೪ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಮರುನಾಮಕರಿಸಲಾಯಿತು. == ಚರಿತ್ರೆ == ಬ್ರಿಟಿಷ್ ಭಾರತಲ್ಲಿನ ಮೂರು ಬೃಹತ್ ರಾಜಸಂಸ್ಥಾನಗಳಲ್ಲಿ ಮೈಸೂರು ಮಹಾಸಂಸ್ಥಾನವೂ ಒಂದು. ಬ್ರಿಟನ್ನಿನಿಂದ ಭಾರತವು ಸ್ವತಂತ್ರಗೊಳ್ಳುತ್ತಿದ್ದಂತೆಯೇ ಮಹಾರಾಜ ಜಯಚಾಮರಾಜೇಂದ್ರ ಒಡೆಯರು ಭಾರತದ ಮಿಲೀನ ತಂತ್ರವನ್ನು ಅಳವಡಿಸಿ ೧೫ ಆಗಸ್ಟ್ ೧೯೪೭ರಂದು ಭಾರತ ಪ್ರಭುತ್ವದೊಂದಿಗೆ ತಮ್ಮ ಸಂಸ್ಥಾನವನ್ನು ವರ್ಜಿಸಿದರು. ಅದರೊಂದಿಗೆ ಮೈಸೂರು ಮಹಾಸಂಸ್ಥಾನವನ್ನು ಭಾರತ ಪ್ರಭುತ್ವದಲ್ಲಿನ ರಾಜ್ಯವೊಂದಾಗಿ ಪುನರ್ರಚಿಸಲಾಯಿತು. === ಮರುಸಂಘಟನೆ === ೧೯೫೬ರಲ್ಲಿ ಭಾರತ ಸರ್ಕಾರವು ಸಮಗ್ರ ಭಾರತದಲ್ಲಿ ಏಕಭಾಷಾರೂಪದ ತತ್ವದ ಆಧಾರದ ಮೇಲೆ ಪ್ರಾಂತೀಯ ಗಡಿಗಳ ಮರುಸಂಘಟಿಸಲು ಕಾಯಿದೆಯೊಂದನ್ನು ಜಾರಿಗೆ ತಂದಿತು. ಈ ಕಾಯಿದೆಯ ಪರಿಣಾಮವಾಗಿ ೧ ನವೆಂಬರ್ ೧೯೫೬ರಂದು ಕನ್ನಡ ಜಿಲ್ಲೆಗಳಾದ ಬಾಂಬೆ ರಾಜ್ಯದ ಬೆಳಗಾವಿಯನ್ನು (ಚಂದ್ರಗೃಹವನ್ನು ಹೊರತು), ವಿಜಯಪುರವನ್ನು, ಧಾರವಾಡವನ್ನು, ಮತ್ತು ಉತ್ತರ ಕನ್ನಡವನ್ನು, ಆಂಧ್ರ ರಾಜ್ಯದಿಂದ ಬಳ್ಳಾರಿಯನ್ನು, ಮಡ್ರಾಸ್ ರಾಜ್ಯದಿಂದ ದಕ್ಷಿಣ ಕನ್ನಡವನ್ನು, ಹೈದರಾಬಾದ್ ರಾಜ್ಯದಿಂದ ಕೊಪ್ಪಳವನ್ನು, ರಾಯಚೂರನ್ನು, ಕಲಬುರ್ಗಿಯನ್ನು, ಮತ್ತು ಬೀದರವನ್ನು ಮೈಸೂರು ರಜ್ಯಕ್ಕೆ ವರ್ಗಾಯಿಸಲಾಯಿತು. ನ್ಯೂನ ಕೊಡಗು ರಾಜ್ಯವನ್ನು ಮೈಸೂರು ರಾಜ್ಯದಲ್ಲಿ ವಿಲೀನಗೊಳ್ಳಿಸಿ ಅದನ್ನು ಜಿಲ್ಲೆಯನ್ನೊಂದಾಗಿ ಮಾರ್ಪಾಡಿಸಲಾಯಿತು. ೧ ನವೆಂಬರ್ ೧೯೭೩ರಂದು ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಿಸಲಾಯಿತು. == ಉಲ್ಲೇಖಗಳು ==